ಶಿವಮೊಗ್ಗ: ತಮ್ಮ ಸಾರ್ವಜನಿಕ, ರಾಜಕೀಯ ಜೀವನದಲ್ಲಿ ನಿರಂತರವಾಗಿ ಸೇವಾ ಕಾರ್ಯ ನಡೆಸಿಕೊಂಡು ಬರುತ್ತಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹಾಗೂ ಅವರ ಪುತ್ರ ಕೆ.ಈ. ಕಾಂತೇಶ್ ಅವರು ಈಗ ಅದೇ ರೀತಿಯಾಗಿ ಒಂದು ಮಾನವೀಯ ಕಾರ್ಯ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ > 251 ನೇ ತಿಂಗಳ ಸಾಹಿತ್ಯ ಹುಣ್ಣಿಮೆ, 250 ಗಾಯಕರಿಂದ ಸಮೂಹ ಗಾಯನ
ಹೌದು… ಸ್ಥಳೀಯ ಪತ್ರಿಕಾ ಕಛೇರಿಗಳಲ್ಲಿ ಜಾಹೀರಾತು ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಂಗನಾಥ್ ಎನ್ನುವವರು ಇತ್ತೀಚೆಗೆ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅಷ್ಟೇನು ಅನುಕೂಲ ಹೊಂದಿಲ್ಲದ ರಂಗನಾಥ್ ಅವರ ಕುಟುಂಬ ಮನೆಯ ಯಜಮಾನನನ್ನು ಕಳೆದುಕೊಂಡು ಕಂಗಾಲಾಗಿತ್ತು. ಈ ಕುಟುಂಬದ ನೆರವಿಗೆ ಈಗ ಕಾಂತೇಶ್ ಧಾವಿಸಿದ್ದಾರೆ.
ರಂಗನಾಥ್ ಅವರ ಕಿರಿಯ ಪುತ್ರ ಕಾರ್ತಿಕ್ ಬಾಲಾಜಿ ಅವರಿಗೆ ಕಾಂತೇಶ್ ಅವರು ತಮ್ಮ ನಂದನ ಶಾಲೆಯಲ್ಲಿ ಸಂಪೂರ್ಣ ಉಚಿತ ಶಿಕ್ಷಣ ಕಲ್ಪಿಸುವ ಭರವಸೆ ನೀಡಿದ್ದು, ಈ ಮೂಲಕ ಮಾನವೀಯತೆ ಮೆರೆದು, ಇತರರಿಗೆ ಮಾದರಿಯಾಗಿದ್ದಾರೆ.
ರಂಗನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಕಾಂತೇಶ್, ನಿಮ್ಮೊಂದಿಗೆ ನಾವಿದ್ಧೇವೆ. ಯಾವುದಕ್ಕೂ ಹೆದರಬೇಡಿ. ಕಾರ್ತಿಕ್ ಬಾಲಾಜಿಯ ಸಂಪೂರ್ಣ ಶಿಕ್ಷಣವನ್ನು ಉಚಿತವಾಗಿ ನಮ್ಮ ನಂದನ ಶಾಲೆಯಲ್ಲೇ ಮಾಡಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ > ತೀರ್ಥಹಳ್ಳಿ, ಎಲೆ ಕೊಯ್ಯಲು ಮರ ಹತ್ತಿದ್ದ ವೇಳೆ ಯುವಕ ಸಾವು!
ರಂಗನಾಥ್ ಅವರ ನಿಧನದ ಬಳಿಕ ಕುಟುಂಬಕ್ಕೆ ಬೆಂಬಲವಾಗಿ ನಂದನ ಶಾಲೆಯವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸ್ಥಳೀಯರು ಈ ಕಾರ್ಯವನ್ನು ಮೆಚ್ಚಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಈ. ವಿಶ್ವಾಸ್, ಗಾರೆ ನಾಗಣ್ಣ, ಮಾರುತಿ ಹಾಗೂ ಭರತ್ ಉಪಸ್ಥಿತರಿದ್ದರು.














