ಶಿವಮೊಗ್ಗ : ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ಎರಡು ವರ್ಷಗಳಿಂದ ನಡೆಸಿದ ಸಾಕಷ್ಟು ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಹಾಗೂ ಶಿವಮೊಗ್ಗದ ಮಾಜಿ ಶಾಸಕ ಕೆಬಿ ಪ್ರಸನ್ನ ಕುಮಾರ್ ಇಂದಿಲ್ಲಿ ಗಂಭೀರವಾಗಿ ಆರೋಪಿಸಿದರು.

ಅವರಿಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ 2023 ಸಾಲಿನಿಂದ ಹೊಸ ಸರ್ಕಾರ ಬಂದ ನಂತರ ನಡೆದಿರುವ ಕಾಮಗಾರಿಗಳ ಸಮಗ್ರ ತನಿಖೆ ನಡೆಸಬೇಕು. ಈ ಸಂಬಂಧ ಆಗ ನಡೆದ ಕೇವಲ 13 ಕಾಮಗಾರಿಗಳನ್ನು ಮುಂದಿಟ್ಟುಕೊಂಡು, ಶಿವಮೊಗ್ಗದ ಇಬ್ಬರು ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ ಎಂದರು.
13 ಕಾಮಗಾರಿಗಳಲ್ಲಿ 40 ಕೋಟಿ ವೆಚ್ಚದ ತೋರಿಸಲಾಗಿದ್ದು, ಅದರಲ್ಲಿ 30 ಕೋಟಿಯಷ್ಟು ಹಣ ಬಿಡುಗಡೆಯಾಗಿದೆ. ಇದರಲ್ಲಿ ಒಟ್ಟಾರೆ ಎಂಟರಿಂದ 10 ಕೋಟಿ ಬೋಗಸ್ ಬಿಲ್ ಬರೆದಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದರು.
ಶಿವಮೊಗ್ಗದ ಗುತ್ತಿಗೆದಾರರಾದ ಬೊಮ್ಮನಕಟ್ಟೆ ಸಾನ್ವಿ ಲೇಔಟ್ ನ ಗುರು ಸಾಯಿ ಹಾಗೂ ಕುವೆಂಪು ನಗರದ ಹೆಚ್ ಸಿ ಬಸವರಾಜಪ್ಪ ಅವರು ದೂರು ನೀಡಿದ್ದು, ಸೂಡಾದಲ್ಲಿ ನಡೆದ ಈ ಕಾಮಗಾರಿಗಳ ಸಮಗ್ರ ಮಾಹಿತಿಯನ್ನು ನೀಡಿದ್ದಾರೆ ಎಂದರು.
ಈ ಇಬ್ಬರು ಗುತ್ತಿಗೆದಾರರು 16 7,26ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಅದಕ್ಕೂ ಪೂರ್ವದಲ್ಲಿ ಸೂಡಾದ ಆಯುಕ್ತರು, ಜಿಲ್ಲಾಧಿಕಾರಿ, ಪಿಡಬ್ಲ್ಯೂಡಿ ಎಸ್ ಇ ಸೇರಿದಂತೆ ಎಲ್ಲರಿಗೂ ದೂರು ನೀಡಿದ್ದು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈಗ ಲೋಕಾಯುಕ್ತದ ಮೊರೆ ಹೋಗಿದ್ದಾರೆ ಎಂದರು.
ಇಲ್ಲಿ ಒಟ್ಟಾರೆ ಸೂಡಾ ಆಯುಕ್ತ ವಿಶ್ವನಾಥ್, ಕಾರ್ಯಪಾಲಕ ಅಭಿಯಂತರ ನಾಗೇಶ್,ಎಂಜಿನಿಯರ್ ನಡಾಫ್ ಎಇಇ ಎಂ ಎ ಬಸವರಾಜಪ್ಪ, ಎಇ ವೀರಗಂಗಾಧರ, ಜೆಇ ದಿನೇಶ್ ಇವರ ಮೇಲೆ ದೂರು ನೀಡಲಾಗಿದೆ ಎಂದರು.
ಆ ಕಾಮಗಾರಿಯ ಅಕ್ರಮಗಳು ಹೇಗಿವೆ ಎಂದರೆ ಈಗಲೂ ವಾಜಪೇಯಿ ಲೇ ಔಟ್, ಊರಗಡೂರಿನ ಕಾಮಗಾರಿ ನೋಡಿ ಎಂದರು.
ಒಟ್ಟಾರೆ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಸುಂದರೇಶ್ ಅವರ ಅವಧಿಯಲ್ಲಿ ನಡೆದ ಎಲ್ಲಾ ಕಾಮಗಾರಿಗಳ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ನಗರಾಧ್ಯಕ್ಷ ದೀಪಕ್ ಸಿಂಗ್, ಪ್ರಮುಖರಾದ ಸಂಗಯ್ಯ, ರಾಘು ಬಾಲರಾಜ್, ನರಸಿಂಹ ಗಂಧದಮನೆ, ಉಮಾಶಂಕರ್ ಉಪಾಧ್ಯಾಯ, ವೆಂಕಟೇಶ್, ಶಂಕರ್, ಪ್ರಭಾಕರ್, ನಿಹಾಲ್, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.













