ಶಿವಮೊಗ್ಗ: ಯುವಕನೊರ್ವ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಯತ್ನಿಸಿದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕನನ್ನ ರಕ್ಷಣೆ ಮಾಡಿರುವ ಘಟನೆ ಭದ್ರಾವತಿ ನಗರದ ಹುತ್ತ ಬಳಿ ಭಾನುವಾರ ನಡೆದಿದೆ.
ಆಗಿದ್ದೇನು?
ಪ್ರೇಮ ವೈಫಲ್ಯದಿಂದ ಮನನೊಂದ ಹಿನ್ನೆಲೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಯತ್ನಿಸಿ ಹಳಿ ಮೇಲೆ ಮಲಗಿದ್ದ. ಈ ವೇಳೆ ಮಾಹಿತಿ ಬಂದ ಕೂಡಲೇ ಗಸ್ತಿನಲ್ಲಿದ್ದ ಭದ್ರಾವತಿ ನ್ಯೂಟೌನ್ ಪೊಲೀಸರಾದ ನಾಗರಾಜ ಹಾಗೂ ಸಲೀಂ ಅವರು ಕೂಡಲೇ ಸ್ಥಳಕ್ಕೆ ಬಂದು ಯುವಕನನ್ನ ರಕ್ಷಣೆ ಮಾಡಿ ಠಾಣೆಗೆ ಕರೆತಂದು ಯುವಕನಿಗೆ ಮನವೊಲಿಸಿ, ಪೋಷಕರನ್ನ ಕರೆಸಿ ಯುವಕನನ್ನ ಮನೆಗೆ ಕಳಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwanismg@gmail.com













