ಶಿವಮೊಗ್ಗ: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹಿಂದಿನಿಂದ ಬೀಡಿ ಸಿಗರೇಟ್ ಹಾಗೂ ಮೊಬೈಲ್ ಎಸೆದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀಡಿದ್ದ ನಗರದ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಜ.30 ರಂದು ಕೇಂದ್ರ ಕಾರಾಗೃಹ ಸೋಗಾನೆ ಒಳಗಡೆ ಯಾರೋ ವ್ಯಕ್ತಿಗಳು ಮೊಬೈಲ್, ಸಿಗರೇಟ್ ಹಾಗೂ ಬೀಡಿಗಳನ್ನು ಕಪ್ಪು ಬಣ್ಣದ ಗಮ್ ಟೇಪ್ ನಿಂದ ಪ್ಯಾಕ್ ಮಾಡಿ ಎಸೆದಿದ್ದು ಈ ಸಂಬಂಧ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.
ಕಲಂ: 42 ಕರ್ನಾಟಕ ಕಾರಾಗೃಹ (ತಿದ್ದುಪಡಿ) ಕಾಯ್ದೆ-2022 ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ಫೋನ್, ಬೀಡಿ ಹಾಗೂ ಸಿಗರೇಟ್ ಅನ್ನು ವಶ ಪಡಿಸಿಕೊಂಡು ತನಿಖೆ ಮುಂದುವರೆಸಿದ್ದರು.
ಸದರಿ ಪರಕರಣದಲ್ಲಿ ಪೊಲೀಸ್ ಅಧೀಕ್ಷಕರಾದ ನಿಖಿಲ್.ಬಿ., ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ. ಕಾರಿಯಪ್ಪ ಹಾಗೂ ರಮೇಶ್ ಕುಮಾರ್, ಪೊಲೀಸ್ ಉಪಾಧೀಕ್ಷಕರಾದ ಬಾಬು ಅಂಜನಪ್ಪ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಕೆ.ಟಿ.ಗುರುರಾಜ್, ಪಿಎಸ್ಐರವರಾದ ಗಾದಿಲಿಂಗಗೌಡರ್, ರಘುವೀರ್, ಹಾಗೂ ಅಪರಾಧ ಸಿಬ್ಬಂದಿಯವರಾದ ಅರುಣ್, ಕಿರಣ್, ರಂಗನಾಥ್, ತಮ್ಮಣ್ಣ ಜಂಬಗಿ ಅವರು ನಿನ್ನೆ ಪ್ರಕರಣದಲ್ಲಿ ಆರೋಪಿತರಾದ ಇಮ್ರಾನ್ ಪಾಷಾ @ ಇಮ್ಮು ಬಿನ್ ಅಮಾನುಲ್ಲಾ, 25 ವರ್ಷ, ಕ್ಯಾಂಟೀನ್ ಕೆಲಸ. ವಾಸ ಟಿಪ್ಪುನಗರ, ಶಿವಮೊಗ್ಗ, ಸೈಯ್ಯದ್ ಮಲ್ಲಿಕ್ @ ತಬ್ರೇಜ್ @ ತಂಬಲ್ ಬಿನ್ ಆದಿಲ್ ಪಾಷಾ,* 22 ವರ್ಷ, ವೆಲ್ಡಿಂಗ್ ಕೆಲಸ, ವಾಸ ಟಿಪ್ಪುನಗರ. ಶಿವಮೊಗ್ಗ ಮತ್ತು ಅಲ್ಲಾ ಬಕಶ್ @ ಪೊಟ್ಯಾಟೋ ಬಿನ್ ಅಮೀರ್ ಅಹಮ್ಮದ್,20 ವರ್ಷ, ಟೈಲ್ಸ್ ಕೆಲಸ. ವಾಸ ಅಂಬೇಡ್ಕರ್ ನಗರ, ಪದ್ಮಾ ಟಾಕೀಸ್ ಹಿಂಭಾಗ, ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಲಾಗಿರುತ್ತದೆ.














