ಶಿವಮೊಗ್ಗ : ಹೊನ್ನಾವರಕ್ಕೆ ಚಲಿಸುತ್ತಿದ್ದ ಮಹೇಂದ್ರ ವೆರಿಟೋ ಕಾರು ಬೆಂಕಿಗೆ ಆಹುತಿಯಾಗಿದೆ. ಶಿವಮೊಗ್ಗ ತಾಲೂಕಿನ ಸನ್ನಿವಾಸ ಮತ್ತು ತುಪ್ಪೂರು ನಡುವೆ ಸಂಭವಿಸಿದೆ.
ಇದನ್ನೂ ಓದಿ > ನೀಟ್ ಪರೀಕ್ಷೆ ಅಕ್ರಮ, ಶಿವಮೊಗ್ಗದಲ್ಲಿ ಸಂಸದರ ಮನೆಗೆ ಯುವ ಕಾಂಗ್ರೆಸ್ ಮುತ್ತಿಗೆ ಯತ್ನ
ಶಿವಮೊಗ್ಗದ ಸೋಮಿನಕೊಪ್ಪದ ವಾಸಿ ಗುಡ್ಡೇಶ್ ಎಂಬವರು ಮಹೇಂದ್ರ ವೆರಿಟೋ ವಾಹನದಲ್ಲಿ ಹೊನ್ನಾವರಕ್ಕೆ ತೆರುಳುವಾಗ ಈ ಘಟನೆ ನಡೆದಿದೆ. ಚಲಿಸುತ್ತಿದ್ದ ಮಹೇಂದ್ರ ವೆರಿಟೋ ವಾಹನದಲ್ಲಿ ಎಸಿ ಆನ್ ಮಾಡಿಕೊಂಡಿದ್ದ ಕಾರಣ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ. ಸನ್ನಿವಾಸದ ಬಳಿ ಬೆಂಕಿ ಹತ್ತಿಕೊಂಡು ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.















