ಶಿವಮೊಗ್ಗ : ಶಿವಮೊಗ್ಗ-ಚಿತ್ರದುರ್ಗ ಹೆದ್ದಾರಿಯ ಹೊಳೆಬೆನವಳ್ಳಿ ಸಮೀಪ ಕಾರೊಂದು ಭತ್ತದ ಗದ್ದೆಗೆ ನುಗ್ಗಿದೆ. ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ ಕಾರು ಎದುರಿನಲ್ಲಿ ಬಂದ ಸರ್ಕಾರಿ ಬಸ್ ಗೆ ಡಿಕ್ಕಿ ತಪ್ಪಿಸಲು ಹೋಗಿ ಚಾಲಕ ಕಾರನ್ನು ರಸ್ತೆ ಬದಿಯ ಭತ್ತದ ಗದ್ದೆಗೆ ನುಗಿಸಿದ್ದಾನೆ.
ಇದನ್ನೂ ಓದಿ > ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ಸಂಭ್ರಮ, ಅಪಾರ ಅಭಿಮಾನಿಗಳು ಭಾಗಿ
ಕಾರು ಒಂದೆರಡು ಪಲ್ಟಿಯಾಗಿ ರಸ್ತೆ ಬದಿಯ ತಗ್ಗಿನಲ್ಲಿರುವ ಗದ್ದೆಗೆ ನುಗ್ಗಿದೆ. ಎಲ್ಲ ಏರ್ ಬ್ಯಾಗ್ಗಳು ತೆರೆದುಕೊಂಡಿದ್ದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಕಾರು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಆಂಧ್ರಪ್ರದೇಶದ ವಿದ್ಯಾರ್ಥಿಯದು ಎನ್ನಲಾಗಿದೆ. ಕೆರೆಯ ಕೆಲಸ ಮಾಡುತ್ತಿದ್ದವರು ಕಾರಿನಲ್ಲಿದವರನ್ನು ರಕ್ಷಿಸಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ > ಶಿವಮೊಗ್ಗ, ಬುರ್ಕಾ ಧರಿಸಿ ಬಂದವರಿಗೆ ಹಿಗ್ಗಾಮುಗ್ಗಾ ಥಳಿತ!














