ಬೆಂಗಳೂರು/ಶಿವಮೊಗ್ಗ: ಪ್ರಸಕ್ತ ಸಾಲಿಯ ರಾಜ್ಯ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದು, ಶಿವಮೊಗ್ಗದ ಮಟ್ಟಿಗೆ ನೋಡುವುದಾದರೆ ಅಂತಹ ಮಹತ್ವದ ಘೋಷಣೆಗಳೇನು ಆಗಿಲ್ಲ.
ಶಿವಮೊಗ್ಗ ಜಿಲ್ಲೆಗೆ ಹಲವು ಯೋಜನೆ ಹಾಗೂ ಅನುದಾನಗಳ ಘೋಷಣೆಯಾಗುವ ನಿರೀಕ್ಷೆಯಿತ್ತಾದರೂ, ಭಾರೀ ಎನ್ನಬಹುದಾದ ಯಾವುದೇ ಘೋಷಣೆಗಳು ಆಗಿಲ್ಲ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್. ಅನಂತಮೂರ್ತಿಯವರ ಹೆಸರಿನಲ್ಲಿ ಕುವೆಂಪು ವಿಶ್ವವಿದ್ಯಾಲಯದಲ್ಲಿ ಒಂದು ಅಧ್ಯಯನ ಪೀಠವನ್ನು ಸ್ಥಾಪಿಸುವುದಾಗಿ ಘೋಷಣೆ ಮಾಡಲಾಗಿದೆ.
ಆಯವ್ಯಯದಲ್ಲಿ ಶಿವಮೊಗ್ಗಕ್ಕೆ ದೊರಕಿದ್ದೇನು
- ಫ್ಲೈಟ್ ಟ್ರೈನಿಂಗ್ ಕೇಂದ್ರ ಸ್ಥಾಪನೆ
- ವಿಮಾನಗಳ ತಯಾರಿಕೆ/ಜೋಡಣಾ ಯೂನಿಟ್ ಪಿಪಿಪಿ ಮಾದರಿಯಲ್ಲಿ ಆರಂಭ
- ಭದ್ರಾವತಿಯಲ್ಲಿ ಇಎಸ್’ಐ ಆಸ್ಪತ್ರೆ ಉನ್ನತೀಕರಣ
- ಜಿಲ್ಲೆಯಲ್ಲಿ ಮೆಟ್ರಿಕ್ ನಂತರದ ಇನ್ನಷ್ಟು ವಿದ್ಯಾರ್ಥಿನಿಲಯ ಸ್ಥಾಪನೆ
- ಕುವೆಂಪು ವಿವಿಯಲ್ಲಿ ಅಧ್ಯಯನ ಪೀಠ ಸ್ಥಾಪನೆ
- ಮಲೆನಾಡು ಭಾಗದಲ್ಲಿ ಕಾಲುಸಂಕ ನಿರ್ಮಾಣ
- ತಾಳಗುಪ್ಪ ಹೊಳೆಗೆ ಬ್ಯಾರೇಜ್ ನಿರ್ಮಾಣ
- ಸೀಗೆಹಳ್ಳ ಚೆಕ್ ಡ್ಯಾಂ ನಿರ್ಮಾಣ
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













