ಶಿವಮೊಗ್ಗ: ನಗರದ ಸೀಗಹಟ್ಟಿಯ ನಿವಾಸಿ ಮಣಿ ಅವರು ಪ್ರೀತಿಯಿಂದ ಸಾಕಿದ್ದ ಫೈಟರ್ ಕುರಿ ʼಶಿವಚೌಡಿ ಧರಣಿʼ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಿದ್ದು, ಈ ಕುರಿಯ ಸ್ಮರಣಾರ್ಥವಾಗಿ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಮಣಿ ಮತ್ತು ಅವರ ಸ್ನೇಹಿತರ ಬಳಗ ಮಾದರಿಯಾಗಿದ್ದಾರೆ.
ಸಾಕುಪ್ರಾಣಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಮಣಿ ಹಾಗೂ ಅವರ ಸ್ನೇಹಿತರು ಆ ಕುರಿಯನ್ನು ಕುಟುಂಬ ಸದಸ್ಯನಂತೆ ನೋಡಿಕೊಂಡಿದ್ದರು. ಕುರಿ ಮೃತಪಟ್ಟ ನಂತರ ಅದಕ್ಕೆ ಸಕಲ ವಿಧಿ ವಿಧಾನಗಳೊಂದಿಗೆ ಶವ ಸಂಸ್ಕಾರ ನೆರವೇರಿಸಲಾಯಿತು. ಬಳಿಕ ಅದರ ನೆನಪಿಗಾಗಿ ವಿಶೇಷವಾಗಿ ತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಇದನ್ನೂ ಓದಿ – ಮಾವನನ್ನೇ ಕುತ್ತಿಗೆ ಸೀಳಿ ಹತ್ಯೆಗೆ ಯತ್ನಿಸಿದ ಅಳಿಯ, ಕಾರಣವೇನು?
ಮರಿಕುರಿಯಾಗಿದ್ದಾಗಲೆ ಫೈಟರ್ ಕುರಿ ʼಶಿವಚೌಡಿ ಧರಣಿ 12 ಕಣಗಳಲ್ಲಿ ಗೆದ್ದು ಬೀಗಿತ್ತು. ಈತನಕ ಒಟ್ಟು 33 ಕಣಗಳ ಸರದಾರ ಎನಿಸಿಕೊಂಡಿತ್ತು.
ಇದನ್ನೂ ಓದಿ – ಮೂರು ರೈಲು ಯೋಜನೆಗಳಿಗೆ ಅನುಮೋದನೆ ನೀಡುವಂತೆ ಸಂಸದ ರಾಘವೇಂದ್ರ ಆಗ್ರಹ















