ಶಿವಮೊಗ್ಗ : ಪ್ರತಿಯೊಂದು ಸಮಾಜಗಳು ಒಂದಾಗುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕೆಂದು ಕಾಂಗ್ರೆಸ್ ನ ಮುಖಂಡ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ > ಭದ್ರಾವತಿ, ಸೇತುವೆಯಿಂದ ಉರುಳಿಬಿದ್ದ ಬಸ್, ಹಲವರಿಗೆ ಗಾಯ!
ನಗರದ ಎನ್.ಇ.ಎಸ್. ಮೈದಾನದಲ್ಲಿ 2 ದಿನಗಳ ಕಾಲ ಆಯೋಜಿಸಲಾಗಿದ್ದ “ಶ್ರೀಕಾಂತಣ್ಣ ಕಪ್ -3” ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ, ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಕೂಡ ಸಮಾಜ ಕಟ್ಟುವಂತಹ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಅದರ ಜೊತೆಗೆ ಎಲ್ಲಾ ಸಮಜಗಳು ಕೂಡ ಒಂದೆಡೆ ಸೇರಿ ಭವಿಷ್ಯದ ಬಗ್ಗೆ, ಮುಂದಿನ ಪೀಳಿಗೆ ಬಗ್ಗೆಯೂ ಯೋಚಿಸಿ, ಯೋಜಿಸಬೇಕಾದ ಅವಶ್ಯಕತೆ ಇದೆ ಎಂದರು.
ನನ್ನ ಜನುಮದಿನದ ಅಂಗವಾಗಿ ಈ ಪಂದ್ಯಾವಳಿ ಆಯೋಜಿಸಿರುವುದು ನನಗೆ ಅತ್ಯಂತ ಖುಷಿ ತಂದಿದೆ ಎಂದು ಹೇಳಿದರು.

ಬಹುಮಾನ ಪಡೆದ ತಂಡಗಳ ವಿವರ
”ಶ್ರೀಕಾಂತಣ್ಣ ಕಪ್” ಪಂದ್ಯಾವಳಿಯಲ್ಲಿ ಒಟ್ಟು 13 ಸಮಾಜಗಳ 19 ತಂಡಗಳು ಭಾಗವಹಿಸಿದ್ದವು. ಅಂತಿಮವಾಗಿ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ವೀರಶೈವ ತಂಡ ಹಾಗೂ ವಿಪ್ರ ಸಿಸಿ ತಂಡ ಎದುರಾಳಿಗಳಾಗಿದ್ದು, ವೀರಶೈವ ತಂಡ “ಶ್ರೀಕಾಂತಣ್ಣ ಕಪ್” ತನ್ನ ಮುಡಿಗೇರಿಸಿಕೊಂಡು, ಕಪ್ ತನ್ನದಾಗಿಸಿಕೊಂಡಿತು. ವಿಪ್ರ ಸಿಸಿ ತಂಡ ದ್ವಿತೀಯ ಬಹುಮಾನ ಪಡೆದರೆ, ಅಂಬಿಗರ ಚೌಡಯ್ಯ ತಂಡ ತೃತೀಯ ಬಹುಮಾನ ಪಡೆಯಿತು.

ಈ ಸಂದರ್ಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಆಟಗಾರರಿಗೆ ಬಹುಮಾನ ವಿತರಿಸಲಾಯಿತು. ಈ ವೇಳೆ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ಮುಖಂಡರಾದ ಪಾಲಾಕ್ಷಿ, ನರಸಿಂಹ ಗಂಧದ ಮನೆ, ಯುವರಾಜ್, ಎ.ಹೆಚ್. ಸುನಿಲ್, ಗಿರೀಶ್, ಶ್ರೀರಾಮ ಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಅಧ್ಯಕ್ಷ ಸಂತೋಷ್ ಸಾಕ್ರೆ ಉಪಸ್ಥಿತರಿದ್ದರು.














