ಭದ್ರಾವತಿ : ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪಕ್ಕದಲ್ಲಿ ನಿರ್ಮಾಗೊಂಡಿರುವ ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಭವನವನ್ನು ಏ: 14 ರಂದು ಮಂಗಳವಾರ ಅಂಬೇಡ್ಕರ್ ದಿನಾಚರಣೆ ಶುಭ ದಿನದಂದು ಉದ್ಘಾಟಿಸಲಾಗುವುದೆಂದು ಶಾಸಕರು ಹಾಗೂ ಭೂಸೇನಾ ನಿಗಮದ (ಕೆಆರ್ಐಡಿಎಲ್) ಅಧ್ಯಕ್ಷ ಬಿ.ಕೆ.ಸಂಗಮೇಶ್ ಹೇಳಿದರು.
ಇದನ್ನೂ ಓದಿ > ಶಿವಮೊಗ್ಗದಲ್ಲಿ 6 ಕಾಲಿನ ಕರುವಿಗೆ ಜನ್ಮ ನೀಡಿದ ಹಸು!
ಅವರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಬೇಡ್ಕರ್ ಭವನ ನಿರ್ಮಾಣಗೊಂಡು ಬಹಳ ದಿನಗಳಾಗಿದ್ದರೂ ಉಪ ಚುನಾವಣೆ ಸೇರಿದಂತೆ ಅನೇಕ ಕಾರಣಗಳಿಂದ ಉದ್ಘಾಟನೆಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಹಲವು ಮುಖಂಡರ ಅಭಿಪ್ರಾಯದಂತೆ ಏ: 14 ರಂದು ಸಂವಿಧಾನ ಶಿಲ್ಪಿ ಡಾ: ಬಾಬಾ ಸಾಹೇಬ್ ಅವರ ಜನ್ಮದಿನ ಭವನವನ್ನು ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿದೆ. ಆದ್ದರಿಂದ ತಾಲೂಕಿನ ಎಲ್ಲಾ ದಲಿತ ಸಂಘಟನೆಗಳು, ಸಂಘ ಸಂಸ್ಥೆಗಳು, ಸ್ತ್ರೀಶಕ್ತಿ ಸಂಘಗಳು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ > ಆಟೋ ಎಲ್ಪಿಜಿ, ಸಿಎನ್ಜಿ, ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಕಠಿಣ ಕ್ರಮ, ಜಿಲ್ಲಾಧಿಕಾರಿಗಳ ಎಚ್ಚರಿಕೆ ಏನು?
ಅಭಿನಂದನೆ:
ಬಹಳ ದಿನಗಳಿಂದ ಲೋಕಾರ್ಪಣೆ ಆಗದೆ ನೆನೆಗುದಿಗೆ ಬಿದ್ದಿರುವ ಡಾ: ಬಾಬಾಸಾಹೇಬ್ ಭವನವನ್ನು ಉದ್ಘಾಟಿಸುವುದಾಗಿ ಘೋಷಣೆ ಮಾಡಿರುವ ಶಾಸಕರ ನಿರ್ಧಾರ ಸಂತಸ ತಂದಿದೆ. ನಮ್ಮ ಹಲವು ವರ್ಷಗಳ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಭವನ ಲೋಕಾರ್ಪಣೆಯಿಂದ ಸಮಾಜದ ಕಟ್ಟಕಡೇಯ ವ್ಯಕ್ತಿಗಳ ಸಭೆ ಸಮಾರಂಭಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಸರಕಾರಿ ಕಾರ್ಯಕ್ರಮಗಳು, ತರಬೇತಿ ಕಾರ್ಯಾಗಾರಗಳನ್ನು ಭವನದಲ್ಲಿ ಆಯೋಜಿಸಬಹುದಾಗಿದೆ. ಭವನದ ಉದ್ಘಾಟನೆಯ ದಿಟ್ಟ ನಿರ್ಧಾರ ತೆಗೆದುಕೊಂಡ ಶಾಸಕ ಸಂಗಮೇಶ್ ಅವರಿಗೆ ಸಮಸ್ತ ನಾಗರೀಕರ ಪರವಾಗಿ ಅಭಿನಂದಿಸುವುದಾಗಿ ಹಾಗೂ ಅಂದಿನ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲಾ ಧರ್ಮಗಳ ಸಮಸ್ತ ನಾಗರೀಕರು ಭಾಗವಹಿಸಬೇಕೆಂದು ಮಾನವ ಹಕ್ಕುಗಳ ಹೋರಾಟ ವೇದಿಕೆಯ ಅಧ್ಯಕ್ಷ ಬಿ.ಎನ್.ರಾಜು ಕೃತಜ್ಞತೆ ಸಲ್ಲಿಸಿದ್ದಾರೆ.














