ಭದ್ರಾವತಿ: ಹಳೇನಗರದ ತಾಲೂಕು ಕಚೇರಿ ರಸ್ತೆಯ ಕಂಚಿನ ಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಮೇ: 9 ರಂದು ಶನಿವಾರ ಮಧ್ಯಾಹ್ನ 12 ಗಂಟೆಗೆ ಮಹಾ ಬ್ರಹ್ಮ ರಥೋತ್ಸವವು ವಿಜ್ರಂಭಣೆಯಿಂದ ನಡೆಯಲಿದೆ. ಶ್ರೀ ಪರಾಭವ ನಾಮ ಸಂವತ್ಸರದ ಉತ್ತರಾಯಣ ವೈಶಾಖ ಬಹುಳದಲ್ಲಿ ಬೆಳಗ್ಗೆ ನವಗ್ರಹ ಹೋಮ, ಅಧಿವಾಸ ಹೋಮ, ರಥ ಶುದ್ದಿ ಹೋಮ, ರಥಾಧಿವಾಸ ಹೋಮ, ಶ್ರೀ ಸ್ವಾಮಿಯ ರಥಾರೋಹಣ ನಡೆಯಲಿದೆ.
ಇದನ್ನೂ ಓದಿ > ಆನಂದಪುರ, ಹಾವು ಕಚ್ಚಿ ಗರ್ಭಿಣಿ ಸಾವು
ಇದರ ಅಂಗವಾಗಿ ಮೇ: 7 ರಂದು ಗುರುವಾರ ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ, ಅಭಿಷೇಕ, ಮಹಾ ಮಂಗಳಾರತಿ, ಸಂಜೆ ದೇವತಾ ಪ್ರಾರ್ಥನೆ, ಫಲ ಸಮರ್ಪಣೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ವಾಸ್ತು ಪೂಜಾಬಲಿ, ರಾಕ್ಷೆಘ್ನ ಹೋಮ, ದಿಗ್ಬಲಿ ನಡೆಯಲಿದೆ. ಮೇ : 8 ರಂದು ಶುಕ್ರವಾರ ಬೆಳಗ್ಗೆ ಗುರು ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಪಣ್ಣಾರಿಕೇಳ ಗಣಯಾಗ, ಧ್ವಜಾರೋಹಣ, ಕೌತುಕ ಬಂಧನ, ಅಂಕುರಾರ್ಪಣ, ಸಂಜೆ ಭೇರಿತಾಡನ, ಅಗ್ನಿ ಜನನ ಹೋಮ, ಅಧಿವಾಸ ಹೋಮ, ಉತ್ಸವ, ಬಲಿದಾನ ನಡೆಯಲಿದೆ.
ಇದನ್ನೂ ಓದಿ > ಮೇ.07-08 ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
ಮೇ; 9 ರಂದು ಶನಿವಾರ ರಥೋತ್ಸವ ಹಾಗೂ ಮೇ: 10ರಂದು ಭಾನುವಾರ ಬೆಳಗ್ಗೆ ಯಾತ್ರಾ ಹೋಮ, ವಾರುಣ ಹೋಮ, ಅವಧೃತ ಸ್ನಾನ, ಸಂಜೆ ಧ್ವಜಾರೋಹಣ, ರಂಗಪೂಜೆ, ದೀಪೋತ್ಸವ, ರಾಷ್ಟ್ರಾಶೀರ್ವಾದ ನಡೆಯಲಿದೆ ಸುತ್ತಮುತ್ತಲ ಪ್ರದೇಶದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಘವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಸೇವಾ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














