ಹೊಸನಗರ: ಆಲಸ್ಯ ಎನ್ನುವುದು ಮನುಷ್ಯನ ದೊಡ್ಡ ಶತ್ರು ಎಂದು ಬೆಕ್ಕಿನ ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಅವರು ಹೊಸನಗರ ತಾಲ್ಲೂಕಿನ ಮೂಲಗದ್ದೆ ಮಠದಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಹಬ್ಬದಲ್ಲಿ ಮಾತನಾಡಿದರು.
ಸಕಾರಾತ್ಮಕ ಮನೋಭಾವನೆಯೊಂದಿಗೆ ಸಾಗಬೇಕು ಹಿಂದೆ ಮುಳುಗಡೆಯಾದಾಗ ಮೂಲ ಮಠದ ಮುಳುಗಡೆಯಾದ ಬಳಿಕ ಅಂದಿನ ಚನ್ನಬಸವ ಸ್ವಾಮೀಜಿಯವರು ಮೂಲೆಗದ್ದೆಯೂ ಸೇರಿದಂತೆ ೩ ಕಡೆಗಳಲ್ಲಿ ಮಠಗಳನ್ನು ಸ್ಥಾಪಿಸಿದ್ದರು. ಈ ಪರಂಪರೆಯನ್ನು ಮುಂದುವರೆಸಿರುವ ಇಂದಿನ ಅಭಿನವ ಚನ್ನಬಸವ ಸ್ವಾಮೀಜಿ ಭಕ್ತಾದಿಗಳನ್ನು ಒಗ್ಗೂಡಿಸಿ ಆಸ್ತಿಕ ಮನೋಭಾವನೆಯನ್ನು ತುಂಬಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
25ಲಕ್ಷ ಅನುದಾನದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ಮಠಮಾನ್ಯಗಳು ಇಂದು ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಜನರಿಗೆ ಆಸರೆಯಾಗುತ್ತಿವೆ. ಇಂತಹ ಗುರುಪರಂಪರೆಗೆ ಆರ್ಥಿಕ ಸಹಾಯ ಮಾಡುವುದು ಉತ್ತಮ ಕೆಲಸ ಸರಕಾರದ ಅನುದಾನದಲ್ಲಿ ರೂ.25 ಲಕ್ಷ ಅನುದಾನ ಕಟ್ಟಡ ನಿರ್ಮಾಣಕ್ಕೆ ನೀಡಲಾಗಿದೆ. ಅಗತ್ಯವಿದ್ದಲ್ಲಿ ಇನ್ನಷ್ಟು ಅನುದಾನ ತರಲು ಬದ್ಧನಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಮಹೇಶ ಮಾಶಾಳ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸರ್ವರನ್ನೂ ಸ್ವಾಗತಿಸಿದರು. ವಿವಿಧ ಮಠಾಧೀಶರಾದ ಪ್ರಭುಸ್ವಾಮೀಜಿ, ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ಪ್ರಮುಖರಾದ ಬಿ.ಸ್ವಾಮಿರಾವ್, ಕೆ.ವಿ.ಪ್ರವೀಣ್, ಚಂದ್ರಮೌಳಿಗೌಡ, ಶಶಿಕಲಾ ಮಲ್ಲಪ್ಪ ಮತ್ತಿತರರು ಉಪಸ್ಥಿತರಿದ್ದರು.













