ಶಿವಮೊಗ್ಗ: ತಾಲ್ಲೂಕಿನ ಗಾಜನೂರಿನ ಸೊಸೈಟಿ ಬಳಿ ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಕೊಲೆ ಮಾಡಿದ್ದ ಇಬ್ಬರನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗದ ಹೊಸಮನೆ 6ನೇ ಕ್ರಾಸ್ನ ಬೋವಿ ಕಾಲೊನಿ ನಿವಾಸಿ, ಗಾರೆ ಕೆಲಸಗಾರ ಶ್ರೀನಿವಾಸ (36) ಎಂಬುವವರನ್ನು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜನೂರಿನ ದೊಡ್ಡಕೇರಿ ಬೀದಿ ನಿವಾಸಿ ಬಟ್ಟೆ ಅಂಗಡಿ ಕೆಲಸಗಾರ ಕೃಷ್ಣಮೂರ್ತಿ (44), ಹಾಗೂ ಗಾರೆ ಕೆಲಸಗಾರ ಮಾಲತೇಶ (21) ಎಂಬುವವರನ್ನು ಬಂಧಿಸಲಾಗಿದೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ರಾತ್ರಿ ಮೂವರು ಕುಳಿತು ಕುಡಿದಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಶ್ರೀನಿವಾಸನ ಮೇಲೆ ಹಲ್ಲೆ ನಡೆಸಿ ಕಲ್ಲು ಎತ್ತಿಹಾಕಿ, ಕತ್ತಿಯಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸನ ಸಹೋದರ ಶ್ರೀಧರ ಪ್ರಕರಣ ದಾಖಲಿಸಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













