ಭದ್ರಾವತಿ: ವಿಷಪೂರಿತ ಹಾವನ್ನು ಬಿಟ್ಟು ಯುವತಿಯನ್ನು ಕೊಲ್ಲಲು ಯತ್ನಿಸಿದ ಆರೋಪದ ಮೇಲೆ ಇಬ್ಬರನ್ನು ನ್ಯೂಟೌನ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನ್ಯೂ ಕಾಲೊನಿ ನಿವಾಸಿಗಳಾದ ಕಿಶೋರ್ ಹಾಗೂ ಜಯಂತ್ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ > ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು!
ಇದನ್ನೂ ಓದಿ > ಮೈಸೂರು-ಶಿವಮೊಗ್ಗ, ತಾಳಗುಪ್ಪದ 3 ರೈಲುಗಳು ಈ 2 ದಿನ ರದ್ದು!
ಕಾರ್ಪೊರೇಟ್ ಕಂಪನಿ ಉದ್ಯೋಗಿಯಾಗಿರುವ ಯುವತಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಇಬ್ಬರು ಮುಸುಕುಧಾರಿಗಳು ಕಾಂಪೌಂಡ್ ಒಳಗೆ ಪ್ರವೇಶಿಸುವುದನ್ನು ಕಿಟಕಿ ಮೂಲಕ ಗಮನಿಸಿದ್ದಾರೆ. ಕಾಂಪೌಂಡ್ ಒಳಗೆ ಹಾವು ಬಿಟ್ಟಿರುವುದನ್ನು ನೋಡಿ ಕಿರುಚಿಕೊಂಡಾಗ, ಮುಸುಕುಧಾರಿಗಳು ಬೈಕ್ ಹತ್ತಿ ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ನೆರೆಹೊರೆಯವರು ಯುವತಿಯ ನೆರವಿಗೆ ಧಾವಿಸಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಪೊಲೀಸರು, ಇಬ್ಬರನ್ನು ಮಂಗಳವಾರ ಬಂಧಿಸಿದ್ದಾರೆ.
ಪ್ರೀತಿ ನಿರಾಕರಿಸಿದ್ದರಿಂದ ಕೋಪಗೊಂಡಿದ್ದ ಆರೋಪಿ, ಯುವತಿಯನ್ನು ಕೊಲ್ಲಲು ಸಂಚು ಮಾಡಿ, ಸ್ನೇಹಿತರಿಗೆ ಆಕೆಯ ಮನೆಯ ಕಾಂಪೌಂಡ್ ಒಳಗೆ ಹಾವು ಬಿಡುವಂತೆ ಹೇಳಿದ್ದ ಎಂದು ತಿಳಿದು ಬಂದಿದೆ.
ಕೊಲ್ಲುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಪೋಷಕರು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ.
ಇದನ್ನೂ ಓದಿ >ತೀರ್ಥಹಳ್ಳಿ ಸಮೀಪ ಗೋವುಗಳ ಕಳವಿಗೆ ಯತ್ನ, ಶಿವಮೊಗ್ಗದ ಇಬ್ಬರ ಬಂಧನ














