ಭದ್ರಾವತಿ: ಬೈಪಾಸ್ ರಸ್ತೆ ಪಕ್ಕದ ಎಂಪಿಎಂ ಬಡಾವಣೆಗೆ ಹೊಸದಾಗಿ ಕಲ್ಪಿಸಿರುವ ಕೆಎಸ್ಆರ್ಟಿಸಿ ಬಸ್ ಸೇವೆಗೆ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್ ಚಾಲನೆ ನೀಡಿದರು.
ಇದನ್ನೂ ಓದಿ > ಹಾವು ಬಿಟ್ಟು ಯುವತಿ ಕೊಲೆಗೆ ಯತ್ನ, ಇಬ್ಬರು ಆರೋಪಿಗಳ ಬಂಧನ!
ಎಂಪಿಎಂ ನಿವೃತ್ತ ನೌಕರರೇ ಹೆಚ್ಚಾಗಿ ನೆಲೆಸಿರುವ ಬಡಾವಣೆಯ ನಾಗರಿಕರ ಬಹು ದಿನದ ಬೇಡಿಕೆ ಮೇರೆಗೆ ಶಾಸಕ ಬಿ.ಕೆ.ಸಂಗಮೇಶ್ವರ ಹಾಗೂ 22ನೇ ವಾರ್ಡ್ ಸದಸ್ಯ ಬಿ.ಕೆ.ಮೋಹನ್ ಕೆಎಸ್ಆರ್ಟಿಸಿ ವಿಭಾಗೀಯ ಪ್ರಬಂಧಕರಿಗೆ ಪತ್ರ ಬರೆದಿದ್ದರು. ಈ ಬಸ್ ಸೇವೆಯಿಂದ ನಿವಾಸಿಗಳಿಗೆ ಅನುಕೂಲವಾಗಿದೆ ಎಂದರು.
ಇದನ್ನೂ ಓದಿ > ನಡುರಸ್ತೆಯಲ್ಲೇ ಧಗಧಗನೇ ಹೊತ್ತಿ ಉರಿದ ಕಾರು!
ಇದನ್ನೂ ಓದಿ > ಮೈಸೂರು-ಶಿವಮೊಗ್ಗ, ತಾಳಗುಪ್ಪದ 3 ರೈಲುಗಳು ಈ 2 ದಿನ ರದ್ದು!
ತರೀಕೆರೆ-ಭದ್ರಾವತಿ ನಡುವೆ ಸಂಚರಿಸುವ ಈ ಬಸ್ ಕೆಎಸ್ಆರ್ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಹೊರಟು ಜಯಶ್ರೀ ವೃತ್ತ, ಪ್ರೊ.ಬಿ. ಕೃಷ್ಣಪ್ಪ ವೃತ್ತ, ಬುಳ್ಳಾಪುರ, ಉಜ್ಜಿನಿಪುರ ಮಾರ್ಗವಾಗಿ ಎಂಪಿಎಂ ಬಡಾವಣೆ ಮುಖಾಂತರ ಬಾರಂದೂರು, ಎಂ.ಸಿ ಹಳ್ಳಿ ಮೂಲಕ ತರೀಕೆರೆ ತಲುಪಲಿದೆ. ಸದ್ಯಕ್ಕೆ ಎರಡು ಬಸ್ಗಳು ಈ ಮಾರ್ಗದಲ್ಲಿ ಸಂಚರಿಸಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂಪಿಎಂ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಟಿ.ಜಿ. ಬಸವರಾಜಯ್ಯ, ಕೆಎಸ್ಆರ್ಟಿಸಿ ಸಿಬ್ಬಂದಿ ಉಪಸ್ಥಿತರಿದ್ದರು.














