ಶಿವಮೊಗ್ಗ: ವಯೋಸಹಜ ಮಂಡಿನೋವು ಮತ್ತು ಕೀಲು ನೋವಿನಿಂದ ಬಳಲುತ್ತಿರುವವರಿಗಾಗಿ ನಗರದ ಸಾಗರ ರಸ್ತೆಯಲ್ಲಿರುವ ನಂಜಪ್ಪ ಲೈಫ್ ಕೇರ್ನಲ್ಲಿ ಸೆ. 1ರಿಂದ ಸೆ. 7ರವರೆಗೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ಗಂಟೆಯವರೆಗೆ ಒಂದು ವಾರ ‘ಮಂಡಿನೋವಿನ ಉಚಿತ ತಪಾಸಣೆಯ ವಿಶೇಷ ಶಿಬಿರ’ ಆಯೋಜಿಸಲಾಗಿದೆ.
ಕುಳಿತುಕೊಂಡವರು ಏಳಲು ಕಷ್ಟಪಡುವ, ಮೆಟ್ಟಿಲು ಹತ್ತಲು ಭಯಪಡುವ ಹಾಗೂ ದೈನಂದಿನ ಕೆಲಸಗಳಿಗೆ ಓಡಾಡಲಾಗದೇ ಮನೆಯಲ್ಲೇ ಕಾಲ ಕಳೆಯುತ್ತಿರುವ ಪ್ರತಿಯೊಬ್ಬರಿಗೂ ಸೂಕ್ತ ವೈದ್ಯಕೀಯ ಸಲಹೆ ಮತ್ತು ಪರಿಹಾರ ಸೂಚಿಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ > > ಶಿವಮೊಗ್ಗದಿಂದ ಆಂಧ್ರಪ್ರದೇಶಕ್ಕೆ 2 ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ, ಇಲ್ಲಿದೆ ಡೀಟೇಲ್ಸ್
7 ದಿನದ ಈ ವಿಶೇಷ ಶಿಬಿರದಲ್ಲಿ ಮೂಳೆ ಶಸ್ತ್ರಚಿಕಿತ್ಸಕರೊಂದಿಗೆ ಉಚಿತ ಸಮಾಲೋಚನೆ ಇರಲಿದೆ. ನಂಜಪ್ಪ ಲೈಫ್ ಕೇರ್ನಲ್ಲಿ ಪ್ರಥಮ ಬಾರಿ ಸಮಾಲೋಚನೆಗೆ ಹಾಜರಾಗುವವರಿಗೆ ನೋಂದಣಿ ಶುಲ್ಕ ಅನ್ವಯಿಸುತ್ತದೆ. ತಪಾಸಣೆಗೆ ಅಗತ್ಯವಿರುವ ರಕ್ತ ಪರೀಕ್ಷೆ ಹಾಗೂ ರೋಗನಿರ್ಣಯ ಪರೀಕ್ಷೆಗಳ ಮೇಲೆ ಶೇ 20 ರಷ್ಟು ವಿಶೇಷ ರಿಯಾಯಿತಿ ದೊರೆಯಲಿದೆ.
ಶಿಬಿರದಲ್ಲಿ ಮೂಳೆ ತಜ್ಞರೊಂದಿಗೆ ಫಿಸಿಯೋಥೆರಪಿಸ್ಟ್, ಆಹಾರ ತಜ್ಞರು (ಡಯಟಿಷಿಯನ್) ಹಾಗೂ ಕೌನ್ಸೆಲಿಂಗ್ ಮಾಡಲು ಸೈಕಾಲಜಿಸ್ಟ್ ಲಭ್ಯರಿರುತ್ತಾರೆ. ಅನುಭವಿ, ತಜ್ಞ ವೈದ್ಯರ ತಂಡವು ಪ್ರತಿಯೊಬ್ಬ ರೋಗಿಯ ಮಂಡಿ ನೋವಿನ ಸಮಸ್ಯೆಯನ್ನು ಕೂಲಂಕಷವಾಗಿ ತಪಾಸಣೆ ಮಾಡಿ, ಸೂಕ್ತ ಚಿಕಿತ್ಸೆ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ಇದನ್ನೂ ಓದಿ > > ಕಸ್ತೂರಿ ರಂಗನ್ ವರದಿ | ಜಂಟಿ ಸರ್ವೇ ಮಾಡಿಸಿ, ಸಂಸದ ಬಿ.ವೈ.ರಾಘವೇಂದ್ರ ಮನವಿ
ಮಂಡಿನೋವಿನಿಂದ ಬಳಲು ತ್ತಿರುವ ಹಿರಿಯರು ಹಾಗೂ ವಯಸ್ಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08182-267300ಗೆ ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಪ್ರಕಟಣೆ ಕೋರಿದೆ.
ಇದನ್ನೂ ಓದಿ > > ಶಿವಮೊಗ್ಗ, ತಿಪ್ಪೆಗುಂಡಿಯಾದ ಸೋಮಿನಕೊಪ್ಪ ಲಾಸ್ಟ್ ಬಸ್ಸ್ಟಾಪ್, ಗಮನ ಹರಿಸುವರೇ ಅಧಿಕಾರಿಗಳು?













