ಹೊಳೆಹೊನ್ನೂರು: ಕಳವು ಮಾಡಲು ಯತ್ನಿಸಿದ್ದ ಅಂದಾಜು 1.29ಕೋಟಿ ಬೆಲೆಯ 350 ಚೀಲ ಅಡಿಕೆ ಹಾಗೂ ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.
ಲಾರಿ ಚಾಲಕ ಮುಹಿಬುಲ್ಲಾ ಖಾನ್, ಗೆಳೆಯರಾದ ಮಹ್ಮಮದ್ ಗೌಸ್ ಹಾಗೂ ನೌಶಾದ್ ಪರಾರಿಯಾಗಿದ್ದಾರೆ.
ಎಚ್. ಕೃಷ್ಣ ಪೂಜಾರಿ ಅವರು ಶಿವಮೊಗ್ಗದಿಂದ ಬೆಂಗಳೂರಿಗೆ ಲಾರಿಯಲ್ಲಿ ಈಚೆಗೆ ಅಡಿಕೆ ಕಳುಹಿಸಿದ್ದರು. ಮೂರ್ನಾಲ್ಕು ದಿನಗಳಾದರೂ ಅದು ಬೆಂಗಳೂರಿಗೆ ತಲುಪದ ಕಾರಣ ಅನುಮಾನಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ > ಶಿವಮೊಗ್ಗ, ಜಿಲ್ಲಾ ಭೋವಿ ವಿದ್ಯಾವರ್ಧಕ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ
ಪ್ರಕರಣದ ಬೆನ್ನತ್ತಿದ ಪೊಲೀಸರು ಚನ್ನಗಿರಿಯ ಕೋಡಿ ಹೊಸೂರು ಬಳಿ ಲಾರಿ ಹಾಗೂ ಅಡಿಕೆ ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಅಡಿಕೆಯನ್ನು ಚಿತ್ರದುರ್ಗದಲ್ಲಿ ಮಾರಾಟ ಮಾಡಿ, ಬಂದ ಹಣವನ್ನು ಹಂಚಿಕೊಳ್ಳುವ ಸಂಚನ್ನು ಆರೋಪಿಗಳು ಹೆಣೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ ಜಿಲ್ಲಾ ಪೊಲೀಸ್ನಿಂದ ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ ಜಾರಿಗೆ
ಎಸ್ಪಿ ನಿಖಿಲ್ ಬಿ, ಎಎಸ್ಪಿ ಕಾರಿಯಪ್ಪ, ಭದ್ರಾವತಿಯ ಡಿವೈಎಸ್ಪಿ ಪ್ರಕಾಶ್ ರಾಥೋಡ್ ಅವರ ಮಾರ್ಗದರ್ಶನದಲ್ಲಿ ಪಟ್ಟಣದ ಪಿಐ ಶಿವಪ್ರಸಾದ್ ಎಂ, ಪಿಎಸ್ಐ ಶಾಂತಲಾ, ಕಾನ್ಸ್ಟೆಬಲ್ಗಳಾದ ಅಣ್ಣಪ್ಪ, ಪ್ರಕಾಶ್ ನಾಯ್ಕ, ನಾಗರಾಜ, ಕುಬೇರನಾಯ್ಕ, ಪ್ರಶಾಂತ್, ಪ್ರವೀಣ್ ಹಂಪೋಳ್, ವಿಶ್ವನಾಥ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತ್ತು.














