ಹೊಸನಗರ: ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಿಗದೇ ಹೋಟೆಲ್ ಉದ್ಯಮ ತತ್ತರಿಸಿದ್ದು, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನಲ್ಲಿ ಕೆಲವು ಹೋಟೆಲ್ಗಳನ್ನು ಮುಚ್ಚಲಾಗಿದೆ.
ಇದನ್ನೂ ಓದಿ > ತುಂಗಾ ನದಿಗೆ ಹಾರಿ ನರ್ಸ್ ಆತ್ಮಹತ್ಯೆ
ಯುದ್ಧ ಶುರುವಾಗಿ ಸುಮಾರು 40 ದಿನಗಳು ಕಳೆದಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಅಭಾವ ಉಂಟಾಗಿನಿಂದಲೂ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಕೆಲವು ಹೋಟೆಲ್ನಲ್ಲಿ ಮೆನುವಿನಲ್ಲಿಯೂ ಆಹಾರ ಪಟ್ಟಿ ಕಡಿಮೆಯಾದಂತೆ ಸಿಬ್ಬಂದಿ ಸಂಖ್ಯೆಯೂ ಇಳಿದಿದೆ.
ಹೊಸನಗರ ಬಸ್ಸ್ಟ್ಯಾಂಡ್ನಲ್ಲಿರುವ ಹೋಟಲ್ಗೆ ಬೀಗ ಹಾಕಿ 40ದಿನಗಳು ಕಳೆದಿದೆ.
ಇದನ್ನೂ ಓದಿ > ಗ್ಯಾಸ್ ದರ ಹೆಚ್ಚಳ, ಆಟೋ ಚಾಲಕರ ಮೇಲಿನ ಹೊರೆ ಇಳಿಸಿ, ಜಿಲ್ಲಾಧಿಕಾರಿಗೆ ಮನವಿ
ಗ್ಯಾಸ್ ಮಾಲೀಕರ ಸಿಬ್ಬಂದಿಗಳ ಹಾಗೂ ಹೊಸನಗರ ಆಹಾರ ನಿರೀಕ್ಷಕರ ಸಹಾಯ ಹಸ್ತದಿಂದ ಇಲ್ಲಿಯವರೆಗೂ ಎಲ್ಲ ಹೋಟಲ್ಗಳು ಎಂದಿನಂತೆ ಬಾಗಿಲು ಓಪನ್ ಮಾಡಿಕೊಂಡು ವಹಿವಾಟು ನಡೆಸುತ್ತಿದ್ದವು. ಅದರೇ ವಾಣಿಜ್ಯ ಗ್ಯಾಸ್ ಇಲ್ಲದೆ ಇರುವುದರಿಂದ ಇಂದಿನಿಂದ ಬಸ್ಸ್ಟ್ಯಾಂಡ್ ಸಮೀಪವಿರುವ ಪ್ರತಿಷ್ಠಿತ ಶೀತಾಲ್ ಹೋಟಲ್, ಶಬರಿ ಹೋಟಲ್ ಹಾಗೂ ಕೆಲವು ಹೋಟಲ್ಗಳನ್ನು ಬಂದ್ ಮಾಡಲಾಗಿದೆ.
ಹೋಟೆಲ್ಗಳ ಬಂದ್ನಿಂದ ಸಾಗರ-ಶಿವಮೊಗ್ಗ ಇತರೆ ಊರುಗಳಿಂದ ಬಂದು ಕೆಲಸ ನಿರ್ವಹಿಸುವ ನೌಕರರು ಪರದಾಟ ನಡೆಸುತ್ತಿದ್ದ ದೃಶ್ಯಗಳು ಕಂಡುಬಂದವು.














