ಶಿಕಾರಿಪುರ: ಎರಡು ದಿನಗಳ ಹಿಂದೆ ತಾಲ್ಲೂಕಿನ ಮುತ್ತಗಿ, ತಡಸನಹಳ್ಳಿ, ಅಡಗಂಟಿ ಗ್ರಾಮದ ಮೂರು ಕಡೆ ಮನುಷ್ಯರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಚಿರತೆ ಸೋಮವಾರ ಅಡಗಂಟಿ ಗ್ರಾಮದ ಅಡಿಕೆ ತೋಟವೊಂದರಲ್ಲಿ ಶವವಾಗಿ ಪತ್ತೆಯಾಗಿದೆ.
ಇದನ್ನೂ ಓದಿ > ಎಂ. ಶ್ರೀಕಾಂತ್ ಹುಟ್ಟು ಹಬ್ಬ, ವಿಶೇಷ ಪೂಜೆ, ಬೃಹತ್ ರಕ್ತದಾನ ಶಿಬಿರ
ಚಿರತೆಯ ಚಲನ-ವಲನದ ಮೇಲೆ ನಿಗಾ ಇಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಅಡಿಕೆ ತೋಟದಲ್ಲಿ ಚಿರತೆ ಮೃತಪಟ್ಟಿರುವುದನ್ನು ಪತ್ತೆ ಹಚ್ಚಿದ್ದಾರೆ.
ವೈದ್ಯಾಧಿಕಾರಿ ನಿಂಗಪ್ಪ, ಅನಂತ್ನಾಯಕ್ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅದರ ಅಂತ್ಯಕ್ರಿಯೆ ಮಾಡಲಾಯಿತು.
ಹಸಿವು, ಅಸ್ವಸ್ಥತೆ ಕಾರಣಕ್ಕೆ ಚಿರತೆ ಸಾವಿಗೀಡಾಗಿರಬಹುದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಎಸಿಎಫ್ ಗೋಪ್ಯಾನಾಯ್ಕ ಹೇಳಿದರು.
ವಲಯ ಅರಣ್ಯಾಧಿಕಾರಿ ಜಾವೆದ್ ಅಂಗಡಿ, ಪರಶುರಾಮ್, ಎಸ್.ಪಿ. ಕಿರಣ್, ರಾಘವನ್, ಸಿಬ್ಬಂದಿ ಸಂತೋಷ್, ಸುನಿಲ್, ನಿಸರ್ಗ ಕಂಜರ್ವೇಟಿವ್ ಟ್ರಸ್ಟ್ನ ಜಿ.ಎನ್.ಅರುಣ್ಕುಮಾರ್, ಸುಣ್ಣದಕೊಪ್ಪ ಪಿಡಿಒ ಕೊಟ್ರೇಶ್ ಇದ್ದರು.














