ಶಿವಮೊಗ್ಗ: ವೈಯುಕ್ತಿಕ ಮತ್ತು ಜಿಲ್ಲೆಯ ಆರ್ಥಿಕ ಸದೃಢತೆ ದೃಷ್ಟಿಯಿಂದ ಚಿಕ್ಕಪುಟ್ಟ ಉದ್ದಿಮೆದಾರು, ಕೈಗಾರಿಕೆಗಳ ಸೇರಿದಂತೆ ಉದ್ಯೋಗದಾತರಿಗೆ ಬ್ಯಾಂಕುಗಳು ನೆರವಿಗೆ ಮುಂದಾಗಬೇಕು ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್. ಎಸ್. ಸುಂದರೇಶ್ ಹೇಳಿದರು.
ನಗರದ ಸಹ್ಯಾದ್ರಿ ಬಡಾವಣೆಯಲ್ಲಿ ಕರ್ಣಾಟಕ ಬ್ಯಾಂಕ್ ಆರಂಭಿಸಿದ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ದೃಷ್ಟಿಯಿಂದ ಬ್ಯಾಂಕುಗಳು ಉದಾರತೆಯಿಂದ ವರ್ತಿಸಬೇಕು. ಹಾಗೆಂದು ಕಾನೂನು, ನಿಯಮ ಮೀರಿ ಸಾಲ ನೀಡಬೇಕಾಗಿಲ್ಲ. ನಿಯಮಕ್ಕೆ ಒಳಪಟ್ಟೆ ಸಾಲ ನೀಡಬೇಕು ಎಂದರು.
ಶಿವಮೊಗ್ಗ ಬದಲಾಗುತ್ತಿದೆ. ಅಭಿವೃದ್ಧಿ ಕಾರ್ಯ ನಾಗಾಲೋಟದಲ್ಲಿದೆ. ಈ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸಬೇಕೆಂದರು.
ಬ್ಯಾಂಕುಗಳು ಸೇರಿದಂತೆ ಪ್ರತಿಯೊಬ್ಬರಲ್ಲಿಯೂ ಧನಾತ್ಮಕ ದೃಷ್ಟಿಕೋನವಿರಬೇಕು. ಇದಾದರೆ ಮಾತ್ರ ಸಾಧನೆ ಸಾಧ್ಯ ಎಂದರಲ್ಲದೆ, ದೇಶದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾದ ಶಿವಮೊಗ್ಗಕ್ಕೆ ದೊಡ್ಡ ಭವಿಷ್ಯವಿದೆ ̤ -ಕಿಮ್ಮನೆ ಜಯರಾಮ್, ಉದ್ಯಮಿ
ಬ್ಯಾಂಕುಗಳು ಬದಲಾಗುತ್ತಿವೆ. ಹೆಚ್ಚು ಹೆಚ್ಚು ಗ್ರಾಹಕ ಸ್ನೇಹಿಯೂ ಆಗುತ್ತಿದೆ. ಆಧುನಿಕ ತಂತ್ರಜ್ಞಾನ ಬ್ಯಾಂಕ್ ಮೂಲಕ ನಮ್ಮ ಕೈ ಸೇರುವ ಹೊತ್ತಿನಲ್ಲಿ ವಂಚನೆಯ ಪ್ರಕರಣಗಳೂ ಹೆಚ್ಚುತ್ತಿದೆ ಎಂದು ಎಚ್ಚರಿಸಿದರು.
ಕರ್ಣಾಟಕ ಬ್ಯಾಂಕ್ ಮುಂದಿನ ಆರ್ಥಿಕ ವರ್ಷದಲ್ಲಿ 1 ಲಕ್ಷ ಕೋಟಿ ರು. ಮುಂಗಡ ಸಾಲ ನೀಡುವ ಗುರಿ ಹೊಂದಿದೆ. ಇದೇ ಹೊತ್ತಿಗೆ 1 ಸಾವಿರ ಮೀರಿ ಸಂಖ್ಯೆಯ ಶಾಖೆಗಳನ್ನು ತೆರೆಯಲಾಗುವುದು. -ರಾಘವೇಂದ್ರ ಭಟ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು, ಸಿಇಓ
ಬ್ಯಾಂಕಿನ ಶಿವಮೊಗ್ಗ ವಿಭಾಗದ ಎಜಿಎಂ ಸಂಜೀವ್ ಕುಮಾರ್ ಅತಿಥಿಗಳನ್ನು ಪರಿಚಿಯಿಸಿ ಸ್ವಾಗತಿಸಿದರು. ನೂತನ ಶಾಖೆಯ ಪ್ರಬಂಧಕ ಅರವಿಂದ ಸ್ವಾಗತಿಸಿದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














