ಶಿವಮೊಗ್ಗ : ನಗರದ ಸಮೀಪವಿರುವ ಸೂಗೂರಿನಲ್ಲಿ ಏ.22ರಿಂದ 24ರವರೆಗೆ ಮೃಡಬಸವೇಶ್ವರ ಸ್ವಾಮಿ ದೇವಸ್ಥಾನದ ಗೃಹಪ್ರವೇಶ, ಕಳಸಾರೋಹಣ, ಈಶ್ವರಯ್ಯ ಗಂಗಮ್ಮ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮಗಳು ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಮುಖ್ಯಸ್ಥ ಜಿ.ಆರ್. ಮಹೇಶ್ವರಪ್ಪ ಹೇಳಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 22ರಂದು ಸಂಜೆ 5ಗಂಟೆಗೆ ವಿಶೇಷ ಪೂಜೆಗಳು ನಡೆಯಲಿವೆ. 23 ರಂದು ಮುಂಜಾನೆ 5 ಗಂಟೆಗೆ ಈಶ್ವರಯ್ಯ ಗಂಗಮ್ಮ ಸಮುದಾಯ ಭವನ ಗೃಹಪ್ರವೇಶ ನೆರವೇರಿಸಲಾಗುತ್ತದೆ. ಧರ್ಮಸಭೆ ದೇವಸ್ಥಾನ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಧರ್ಮಸಭೆಯ ಸಾನಿಧ್ಯವನ್ನು ಬೆಕ್ಕಿನಕಲ್ಮಠದ ಶ್ರೀಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ, ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ವಹಿಸುವರು. ಸಭಾ ಕಾರ್ಯಕ್ರಮದಲ್ಲಿ ಸಚಿವ ಮಧುಬಂಗಾರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರುಗಳಾದ ಚನ್ನಬಸಪ್ಪ, ಅಶೋಕ್ನಾಯ್ಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕು.ಹಾರಿಕಾ ಮಂಜುನಾಥ್ ಉಪನ್ಯಾಸ ನೀಡಲಿದ್ದಾರೆ ಎಂದರು.
ಇದನ್ನೂ ಓದಿ > BREAKING NEWS : ನಾಳೆ SSLC ಫಲಿತಾಂಶ ಪ್ರಕಟ!
24ರಂದು ದೇವಸ್ಥಾನದ ಕಳಸಾರೋಹಣ ಮತ್ತು ಧರ್ಮಸಭೆ ನಡೆಯಲಿದ್ದು, ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಶಾರದಾಪೂರ್ಯನಾಯ್ಕ್, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಆರ್.ಬಸವರಾಜಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನೀರಾವರಿ ನಿಗಮದ ಇಂಜಿನಿಯರ್ ಎಂ.ಜಿ.ಪ್ರಸನ್ನಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಇದನ್ನೂ ಓದಿ > ಆನಂದಪುರ, ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ
ಇದೇ ಸಂದರ್ಭದಲ್ಲಿ ದಾನಿಗಳಿಗೆ ಮತ್ತು ಮುಖ್ಯ ಅತಿಥಿಗಳಿಗೆ ಸನ್ಮಾನ ನಡೆಸಲಾಗುವುದು. ಸಂಜೆ 8 ಗಂಟೆಗೆ ಪ್ರೊ ಕೃಷ್ಣಗೌಡ ಹಾಗೂ ಸುಧಾಬರಗೂರು ಅವರಿಂದ ಹಾಸ್ಯ ಸಂಜೆ ಇರುತ್ತದೆ. ಎರಡು ದಿನಗಳ ಕಾಲವೂ ಸಂಜೆ ಭಕ್ತಿವಚನ, ಭರತನಾಟ್ಯ, ವಚನಗಾಯನ ಇರುತ್ತದೆ. ಸುರೇಖಾ ಹೆಗಡೆ ಮತ್ತು ತಂಡದಿಂದ ಗೀತೋತ್ಸವ ಕಾರ್ಯಕ್ರಮ ಕೂಡಾ ಇರುತ್ತದೆ. 25 ರಂದು ರಾತ್ರಿ 9 ಗಂಟೆಗೆ ಗ್ರಾಮದ ಯುವಕರಿಂದ ಶಾಂತಿಯೇ ಸಂಸಾರದ ಸಂಪತ್ತು ಎಂಬ ನಾಟಕವೂ ಕೂಡಾ ಇರುತ್ತದೆ ಎಂದರು.
ಇದನ್ನೂ ಓದಿ > ಮೇ.15ರೊಳಗೆ ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಬೃಹತ್ ಹೋರಾಟ, ಕೆ.ಈ.ಕಾಂತೇಶ್
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನವಿಲಯ್ಯ, ಉಮಾ ಪಿ.ಎಂ., ವಸಂತಕುಮಾರ್, ಉಮೇಶ್, ಶಾಂತವೀರಪ್ಪ, ನವೀನ್ ಸೇರಿದಂತೆ ಹಲವರಿದ್ದರು.















