ಶಿವಮೊಗ್ಗ: ನಗರದಲ್ಲಿ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ದೇವರಾಜ್ ಅವರ ನೇತೃತ್ವದಲ್ಲಿ ಸಂಚಾರಿ ಪೊಲೀಸರು ಇಂದು ಬೆಳಗ್ಗೆ ಬಸ್ಗಳ ತಪಾಸಣೆ ನಡೆಸಿ ಮದ್ಯಪಾನ ಮಾಡಿ ಬಸ್ ಚಾಲನೆ ಮಾಡುತ್ತಿದ್ದ ವಾಹನ ಚಾಲಕರಿಗೆ ಶಾಕ್ ನೀಡಿದರು.!
ಇದನ್ನೂ ಓದಿ > > ಸರ್ಜಿ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ
ಒಟ್ಟು 45 ಬಸ್ಗಳ ತಪಾಸಣೆ ನಡೆಸಿದ ಸಂಚಾರಿ ಪೊಲೀಸರು, ಮದ್ಯಪಾನ ಮಾಡಿ ಬಸ್ ಚಾಲನೆ ಮಾಡುತ್ತಿದ್ದ ಮೂವರು ಚಾಲಕರು ಪತ್ತೆಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಚಾಲಕರ ದಾಖಲೆಗಳು, ವಾಹನಗಳ ಸುರಕ್ಷತಾ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದ ಅವರು ಪ್ರಯಾಣಿಕರಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಿದರು.
ಇದನ್ನೂ ಓದಿ > > ಶಿವಮೊಗ್ಗ, ಟಿಪ್ಪುನಗರದ ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 52,000 ರೂ. ದಂಡ, ಏನಿದು ಪ್ರಕರಣ?
ಪ್ರಯಾಣಿಕರಿಗೆ ನೀಡಿದ ಸಲಹೆ, ಸೂಚನೆಗಳೇನು?
ಸಾರ್ವಜನಿಕರು ಬಸ್ಗೆ ಹತ್ತುವ ಮುನ್ನ ಚಾಲಕರ ವರ್ತನೆ, ಆರೋಗ್ಯ ಸ್ಥಿತಿ ಹಾಗೂ ಮದ್ಯದ ಅಮಲಿನ ಲಕ್ಷಣಗಳ ಬಗ್ಗೆ ಗಮನಹರಿಸಬೇಕು.
ಅನುಮಾನಾಸ್ಪದ ಪರಿಸ್ಥಿತಿ ಕಂಡುಬಂದರೆ ತಕ್ಷಣ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿ.
ಪ್ರಯಾಣಿಕರ ಜಾಗೃತಿಯೂ ಅಪಘಾತಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳಾ ಸುರಕ್ಷತೆ ಕುರಿತು ಜಾಗೃತಿ
ವಿಶೇಷ ತಪಾಸಣೆ ವೇಳೆ ಸಿಪಿಐ ದೇವರಾಜ್ ಅವರು ಖುದ್ದಾಗಿ ಬಸ್ಗಳಿಗೆ ಭೇಟಿ ನೀಡಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಕುರಿತು ಜಾಗೃತಿ ಮೂಡಿಸಿದರು. ಮಹಿಳೆಯರು ಯಾವುದೇ ತುರ್ತು ಪರಿಸ್ಥಿತಿ ಅಥವಾ ಕಿರುಕುಳ ಎದುರಾದರೆ ತಕ್ಷಣ ಪೊಲೀಸ್ ಸಹಾಯವಾಣಿ ಅಥವಾ ಸಮೀಪದ ಪೊಲೀಸ್ ಸಿಬ್ಬಂದಿಯನ್ನು ಸಂಪರ್ಕಿಸುವಂತೆ ತಿಳಿಸಿದರು.














