ಹೊಳೆಹೊನ್ನೂರು: ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ಇಆರ್ಎಸ್ಎಸ್ 112 ಸಿಬ್ಬಂದಿ ರಕ್ಷಿಸಿರುವ ಘಟನೆ ಕೂಡ್ಲಿಯ ತುಂಗಭದ್ರಾ ನದಿ ತೀರದಲ್ಲಿ ನಡೆದಿದೆ.
ಇದನ್ನೂ ಓದಿ > > ತೋಟದಲ್ಲಿ ಬೆಳೆದಿದ್ದ 2.10 ಲಕ್ಷ ರೂ. ಮೌಲ್ಯದ ಗಾಂಜಾ ಗಿಡ ವಶ, ಇಬ್ಬರ ಬಂಧನ!
ಚಿತ್ರದುರ್ಗದ ನಿವಾಸಿಯೊಬ್ಬರು ಇಆರ್ಎಸ್ಎಸ್ 112 ಸಹಾಯವಾಣಿಗೆ ಕರೆ ಮಾಡಿ, ತಮ್ಮ ಪತ್ನಿ ಹೊಳೆಹೊನ್ನೂರಿನ ಕೂಡ್ಲಿಯ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿರುವುದಾಗಿ ದೂರು ನೀಡಿದ್ದಾರೆ.
ಇದನ್ನೂ ಓದಿ > > ಒಂಟಿ ಮಹಿಳೆಗೆ ವಂಚನೆ, ಪೊಲೀಸರಿಂದ ಆಂಧ್ರಪ್ರದೇಶದ ಇಬ್ಬರ ಬಂಧನ!
ಈ ಮಾಹಿತಿ ಪಡೆದ ತಕ್ಷಣ ಕರ್ತವ್ಯದಲ್ಲಿದ್ದ ಇಆರ್ವಿ ಸಿಬ್ಬಂದಿಗಳಾದ ಸಿಪಿಸಿ ಅಶೋಕ್ ಕುಮಾರ್ ಹಾಗೂ ಚಾಲಕ ಎಪಿಸಿ ಅಮರೇಶ್ ನಾಯ್ಕ್ ಅವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ನದಿ ತೀರದಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಮಹಿಳೆಯನ್ನು ಗುರುತಿಸಿ, ಆಕೆಯ ಪ್ರಾಣವನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ > > ಶಿವಮೊಗ್ಗ, ಪೊಲೀಸ್ ಠಾಣೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ
ಸಿಬ್ಬಂದಿಯ ಸಮಯಪ್ರಜ್ಞೆ ಹಾಗೂ ಕರ್ತವ್ಯನಿಷ್ಠೆಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.















