ಭದ್ರಾವತಿ :ನಗರದ ವಿವಿದೆಡೆಯ ದೇವಾಲಯಗಳಲ್ಲಿ ಶುಕ್ರವಾರ ಶ್ರೀ ರಾಮ ನವಮಿ ಅಂಗವಾಗಿ ವಿಶೇಷ ಪೂಜಾ ವಿಧಿವಿಧಾನಗಳು ನಡೆದವು ಮಹಿಳೆಯರು ಸೇರಿದಂತೆ ಭಕ್ತರು ಪೂಜೆ ಸಲ್ಲಿಸಿ ಪಾನಕ ಕೋಸುಂಬರಿ ಪ್ರಸಾದ ಪಡೆದು ಪುನೀತರಾದರು.

ನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪ್ರಧಾನ ಅರ್ಚಕ ರಂಗನಾಥ ಶರ್ಮಾ ಮತ್ತು ಸಹಾಯಕ ಅರ್ಚಕ ಶ್ರೀನಿವಾಸ್ ನೇತೃತ್ವದಲ್ಲಿ ದೇವರಿಗೆ ವಿಶೇಷ ಅಲಂಕಾರ ಪೂಜೆ ಮಾಡಲಾಗಿತ್ತು. ಶ್ರೀ ಸೀತಾ ರಾಮ ಶ್ರೀ ಆಂಜನೇಯ ಸ್ವಾಮಿಯ ಪಲ್ಲಕ್ಕಿ ಉತ್ಸವವು ದೇವಾಲಯದ ಆವರಣದಿಂದ ರಥ ಬೀದಿ, ಹಳದಮ್ಮಕೇರಿ, ಖಾಜಿಮೊಹಲ್ಲಾ, ಆಚಾರರ ಬೀದಿಯಿಂದ ತರೀಕೆರೆ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.

ಇದನ್ನೂ ಓದಿ > ಶಿವಮೊಗ್ಗದಲ್ಲಿ ಮತ್ತೆ ರಂಗೇರುತ್ತಿದೆ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್ಗಳ ಅನಾವರಣ
ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಮುಜರಾಯಿ ಇಲಾಖೆಯ ತಹಸೀಲ್ದಾರ್ ಪ್ರದೀಪ್, ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮಾಕಾಂತ್, ಸದಸ್ಯರಾದ ನಾಗೇಶ್, ಮಹೇಶ್, ಸತೀಶ್ ಅಯ್ಯರ್, ಆಶಾ ಶಿವಾನಂದ್, ಹಾಲಮ್ಮ ಮುಂತಾದವರು ಭಾಗವಹಿಸಿದ್ದರು. ನೂರಾರು ಭಕ್ತರಿಗೆ ಪಾನಕ ಕೋಸಂಬರಿ ವಿತರಿಸಲಾಯಿತು.
ತಾಲೂಕು ಕಚೇರಿ ರಸ್ತೆಯಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅರ್ಚಕ ಪವನ್ಕುಮರ್ ಉಡುಪ ಸಾರಥ್ಯದಲ್ಲಿ ಶ್ರೀ ಆಂಜನೇಯಸ್ವಾಮಿ ದೇವರಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿತು. ಅಕರ್ಷಣೆಯಿಂದ ಶ್ರೀ ರಾಮನವಮಿ ಅಚರಿಸಿ ದೇವಾಲಯ ಅವರಣದಲ್ಲಿ ಉತ್ಸವ ಮಾಡಿ ಸಹಸ್ರಾರು ಭಕ್ತರಿಗೆ ಕೋಸಂಬರಿ ಪಾನಕ ವಿತರಿಸಲಾಯಿತು. ದೇವಾಲಯ ಅಭಿವೃದ್ದಿ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ರಾಜಶೇಖರ, ಖಜಾಂಚಿ ದುಗ್ಗೇಗೌಡ, ಆಶಾ ಮತ್ತಿತರೆ ಮುಖಂಡರು ಭಾಗವಹಿಸಿದ್ದರು.
ಹಳೇನಗರದ ಶ್ರೀ ರಾಮೇಶ್ವರ ದೇವಾಲಯ, ನಗರದ ಗೌಳಿಗರ ಬೀದಿಯ ಶ್ರೀ ರಾಮ ಮಂದಿರ, ಹೊಸಮನೆಯ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ವಿನಾಯಕ ಚಿತ್ರಮಂದಿರ ಪಕ್ಕದ ಶ್ರೀ ಶನೇಶ್ವರ ಸ್ವಾಮಿ ದೇವಾಲಯ, ಲೋಯರ್ ಹುತ್ತಾ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯ, ಈಶ್ವರ ದೇವಾಲಯ, ಅಪ್ಪರ್ ಹುತ್ತಾ ಶ್ರೀ ನಂದಿ ಈಶ್ವರ ದೇವಾಲಯ, ಜನ್ನಾಪುರದ ಶ್ರೀ ಈಶ್ವರ ದೇವಾಲಯ, ನ್ಯೂಕಾಲೋನಿ ಶ್ರೀ ರಾಮಮಂದಿರ, ಕಾಗದ ನಗರದ ಶ್ರೀ ರಾಮ ದೇವಾಲಯ, ಶ್ರೀ ಈಶ್ವರ ದೇವಾಲಯ, ತಿಮ್ಲಾಪುರದ ಶ್ರೀ ವೆಂಕಟೇಶ್ವರ ದೇವಾಲಯ, ಮಿಲ್ಟ್ರಿಕ್ಯಾಂಪ್ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ಶ್ರೀ ರಾಮ ನವಮಿ ಆಚರಿಸಲಾಯಿತು. ಸಹಸ್ರಾರು ಭಕ್ತರು ಸಂಭ್ರಮಿಸಿದರು.














