ಶಿವಮೊಗ್ಗದ ಎಂಬಿಸಿ ತಂಡದವತಿಯಿಂದ ಆಯೋಜಿಸಿರುವ ’ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿಯ ಆಕರ್ಷಕ ಟ್ರೋಫಿ ಹಾಗೂ ಟೀ-ಶರ್ಟ್ಗಳನ್ನು ನಗರದ ಮಥುರಾ ಹೋಟೆಲ್ನಲ್ಲಿ ಕಾಂಗ್ರೆಸ್ ಪಕ್ಷದ ನಾಯಕ, ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆಯೇ ಪರಮಧರ್ಮವಾಗಿದ್ದು, ನನ್ನ ಕೈಯಲ್ಲಾದ ಸಹಕಾರ ಮಾಡುವುದನ್ನು ನಾನು ರೂಢಿಸಿಕೊಂಡು ಬಂದಿದ್ದೆನೆ. ಪ್ರತಿ ಬಾರಿ ಎಂಬಿಸಿ ತಂಡ, ನನ್ನ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿಕೊಂಡು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದಕ್ಕೆ ಶ್ಲಾಘಿಸಿದರು.
ಇದನ್ನೂ ಓದಿ > ಎಸ್.ಎಸ್.ಎಲ್.ಸಿಯಲ್ಲಿ ತೃತೀಯ ಭಾಷೆ ಇನ್ಮುಂದೆ ಗ್ರೇಡಿಂಗ್, ಪಾಸ್-ಫೇಲ್ ಪದ್ಧತಿ ರದ್ದು!
ಕಳೆದ ಬಾರಿ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ 7 ಸಮುದಾಯಗಳ 12 ತಂಡಗಳು ಪಾಲ್ಗೊಂಡಿದ್ದವು. ಅದರಂತೆ, ಈ ಬಾರಿ 13 ಸಮುದಾಯಗಳ 19 ತಂಡ ಭಾಗವಹಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು. ಪ್ರತಿ ಸಮುದಾಯಗಳ ಯುವಕರು, ಕ್ರಿಕೆಟ್ ಮೂಲಕ ಒಂದೆಡೆ ಸೇರಿ, ತಮ್ಮ ಗೆಳೆತನ ಮತ್ತಷ್ಟು ಗಟ್ಟಿಗೊಳ್ಳುವಿಕೆಗೆ ಈ ಕಾಂತಣ್ಣ ಕಪ್ ಪಂದ್ಯಾವಳಿ ಸಹಕಾರಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಎನ್.ಇ.ಎಸ್ ಮೈದಾದನಲ್ಲಿ ಮಾರ್ಚ್ 28 ಮತ್ತು 29ರಂದು ಶ್ರೀಕಾಂತಣ್ಣ ಕಪ್ ಸೀಸನ್ 3 ಪಂದ್ಯಾವಳಿಗಳು ನಡೆಯಲಿವೆ. ಗೆದ್ದ ತಂಡಕ್ಕೆ 55,555 ರೂ. ಹಾಗೂ ಆಕರ್ಷಕ ಟ್ರೋಫಿ, ರನ್ನರ್ ಅಪ್ ತಂಡಕ್ಕೆ 33,333 ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಅಲ್ಲದೇ ಮೂರನೇ ಬಹುಮಾನ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು.
ಇದನ್ನೂ ಓದಿ > ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ, ಕೆ.ಎಸ್. ಈಶ್ವರಪ್ಪ ಹೇಳಿದ್ದೇನು?
ಅಲ್ಲದೇ, ಈ ಬಾರಿ ಲಕ್ಕಿ ಡಿಪ್ ಸಹ ಇರಲಿದ್ದು, ಪ್ರಥಮ ಬಹುಮಾನವಾಗಿ 1 ಕುರಿ, ದ್ವಿತೀಯ ಲಕ್ಕಿ ಬಹುಮಾನವಾಗಿ ಸೈಕಲ್ ಹಾಗೂ ಮೂರನೇ ಲಕ್ಕಿ ಬಹುಮಾನವಾಗಿ ಒಂದು ಕ್ರಿಕೆಟ್ ಬ್ಯಾಟ್ ನೀಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಭಾವಸಾರ ಸಮಾಜದ ಅಧ್ಯಕ್ಷ ಗಜೇಂದ್ರನಾಥ್ ಮಾಳೋದೆ, ಭಾವಸಾರ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಪತ್ರಕರ್ತರಾದ ಗೋ.ವ. ಮೋಹನಕೃಷ್ಣ, ಗ್ಯಾರಂಟಿ ಯೋಜನೆ ಸದಸ್ಯರಾದ ಬಸವರಾಜ್, ಮುಖಂಡರಾದ ಲೋಕೆಶ್, ರಾಜು, ಆಯೋಜಕರಾದ ವಿನಯ್ ತಾಂದ್ಲೆ ಸೇರಿದಂತೆ ಎಂಬಿಸಿಯ ಮಂಜು ಬೇದ್ರೆ ಹಾಗೂ ತಂಡದ ಸದಸ್ಯರೆಲ್ಲರೂ ಉಪಸ್ಥಿತರಿದ್ದರು.














