ಶಿವಮೊಗ್ಗ : ಏಪ್ರಿಲ್ 11ರಂದು ಹುಬ್ಬಳ್ಳಿ ಯ ಶ್ರೀ ಬನಶಂಕರಿ ದೇವಸ್ಥಾನ, ಬನಶಂಕರಿ ಬಡಾವಣೆ, ವಿದ್ಯಾನಗರ (ಲ್ಯಾಂಡ್ ಮಾರ್ಕ್: ಲಿಂಗರಾಜ ನಗರ ಮುಖ್ಯರಸ್ತೆ, ಕಾಳಿದಾಸ ಕ್ರಾಸ್) ದಲ್ಲಿ ಮೊಣಕಾಲು ನೋವು ನಿವಾರಣಾ (ಶಸ್ತ್ರಚಿಕಿತ್ಸೆ ಇಲ್ಲದೆ) # Knee Pain Relief Camp ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶಿವಾನಂದ ಸಂಗನಗೌಡ್ರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ, ಬೈಕ್ ವೀಲಿಂಗ್ ಮಾಡಿ ವಿಡಿಯೋ ಹರಿಬಿಟ್ಟ ಯುವಕರು, ಮುಂದೇನಾಯ್ತು?
ಮೊಣಕಾಲು ನೋವು (ಅಸ್ಥಿ ಸಂಧಿವಾತ) ಇದು ಭಾರತದಲ್ಲಿ ಸಾಮಾನ್ಯ ಸಮಸ್ಯೆಯಾಗಿದ್ದು, ವಯಸ್ಸಾದಂತೆ ಮೊಣಕಾಲಿನ ನೋವು ಹೆಚ್ಚಾಗುತ್ತದೆ ಮತ್ತು ಕಾಲುಗಳನ್ನು ಮಡಚಿ ಕುಳಿತುಕೊಳ್ಳಲು ಸಹ ಕಷ್ಟವಾಗುತ್ತದೆ. ಇದರಿಂದ ಸಾಮಾನ್ಯವಾಗಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಸೂಚಿಸಲಾಗುತ್ತದೆ. ಆದರೆ ನಮ್ಮಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಮೊಣಕಾಲಿನ ನೋವನ್ನು ನಿವಾರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಏ.09 ಶಿಬಿರಕ್ಕೆ ಹೆಸರನ್ನು ನೊಂದಾಯಿಸಲು ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 98803 56009 (ಶಿವಾನಂದ ಸಂಗನಗೌಡ), 93412 41348 (ಜಗದೀಶ-ಧಾರವಾಡ), 93418 11118 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ, ಗುಡ್ ಫ್ರೈಡೇ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ, ಘಟನೆ ಆಗಿದ್ದೇಲ್ಲಿ?
ಪಿ ಆರ್ ವಾದರ್ (Artificial Limb Center) ಕೃತಕ ಅಂಗ ಸಂಸ್ಥೆ ಇದು ಪಿ.ಎನ್.ಆರ್. ಸೊಸೈಟಿ ಫಾರ್ ರಿಆಫ್ ಅಂಡ್ ರಿಹ್ಯಾಬಿಲಿಟೇಶನ್ ಆಫ್ ಡಿಸೆಬಲ್, ಭಾವನಗರ ಇವರು ತಯಾರಿಸಿರುವ ಪಾಲೀಸೆಂಟ್ರಿಕ್ ಮೊಣಕಾಲು ಪಟ್ಟಿ (Polycentic Knee Brace) ಇದು ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೊಣಕಾಲು ನೋವು ನಿವಾರಣೆ ಮಾಡುತ್ತದೆ ಮತ್ತು ಕಡಿಮೆ ಖರ್ಚಿನಲ್ಲಿ ತುಂಬಾ ಪರಿಣಾಮಕಾರಿ. ಇವರ ತಂಡವು Orthotist (ಆರ್ಥೈಟಿಸ್) ಮತ್ತು Prosthetist (ಪ್ರೊಸ್ಟಿಸ್ಟ) ಸಿಬ್ಬಂದಿ ವರ್ಗವನ್ನು ಹೊಂದಿದ್ದು ಮೊಣಕಾಲು ನಿವಾರಣೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಡಾ. ಮಿಲನ್ ನಕುಮ್ బి.టి.ఓ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ














