ಶಿವಮೊಗ್ಗ: ಬಿಜೆಪಿ ಪಕ್ಷ ಕರ್ನಾಟಕ ರಾಜ್ಯದಲ್ಲಿ ನಶಿಸಿ ಹೋಗುತ್ತಿದ್ದು, ಕೇಂದ್ರದ ನಾಯಕರು ಸರಿಪಡಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯಲ್ಲಿ ಸಾಮೂಹಿಕ ಸಂಘಟನೆ ಇಲ್ಲವಾಗಿದೆ. ಈ ನೋವು ಬಹಳಷ್ಟು ನಾಯಕರನ್ನು ಕಾಡುತ್ತಿದೆ. ನಾನು ಧೈರ್ಯವಾಗಿ ಹೇಳುತ್ತಿದ್ದೆನೆ ಅμÉ್ಟೀ. ನನ್ನಂತೆ ನೋವಿರುವವರು ಕೂಡ ಸಾಮೂಹಿಕ ನಾಯಕತ್ವದ ಬಗ್ಗೆ ಮತ್ತು ಬಿಜೆಪಿಯ ಸಂಘಟನೆಯ ಬಗ್ಗೆ ಆಸಕ್ತಿ ವಹಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ > > ಸೆ.1ರಿಂದ ನಂಜಪ್ಪ ಲೈಫ್ ಕೇರ್ನಲ್ಲಿ ಮಂಡಿನೋವು ಉಚಿತ ತಪಾಸಣೆ ಶಿಬಿರ, ಶೇ 20 ರಷ್ಟು ವಿಶೇಷ ರಿಯಾಯಿತಿ!
ಬಿಜೆಪಿ ಗಟ್ಟಿಗೊಳ್ಳಲೆಬೇಕಾಗಿದೆ. ನನ್ನ ಹೃದಯದಲ್ಲಿ ಬಿಜೆಪಿಯೇ ಇದೆ. ಅಲ್ಲಿ ಮೋದಿ ಕಮಲದ ರೀತಿಯಲ್ಲಿ ಅರಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿಯನ್ನು ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ದೊಡ್ಡವರು ಬಂದು ನನ್ನ ಜೊತೆ ಮಾತನಾಡಿದ್ದಾರೆ. ಒಬ್ಬ ರಾಜಕಾರಣಿ ಸನ್ಯಾಸಿ ಆಗುವುದಿಲ್ಲ. ಆತನಿಗೆ ಸಿದ್ದಾಂತವು ಬೇಕು. ರಾಜಕಾರಣವು ಬೇಕು. ಎರಡು ಮುಖ್ಯವಾಗುತ್ತವೆ. ದೊಡ್ಡವರು ಪಕ್ಷವನ್ನು ಸರಿ ಮಾಡಿಯೇ ಮಾಡುತ್ತಾರೆ ಎಂದರು.
ಬಿಜೆಪಿ ಕ್ಷೀಣಿಸುತ್ತಿದೆ ಎಂದು ಒಪ್ಪಿಕೊಂಡ ಅವರು, 28 ಸಂಸದರ ಸಂಖ್ಯೆ ಈಗ 17 ಕ್ಕೆ ಬಂದಿದೆ. ಇತ್ತೀಚಿಗೆ ನಡೆದ ಎಲ್ಲಾ ಉಪ ಚುನಾವಣೆಗಳಲ್ಲೂ ಬಿಜೆಪಿ ಸೋತಿದೆ. ಪ್ರಮುಖವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ರಾಸಿಂಗ್ ಓಟ್ ಕೂಡ ಆಗಿದೆ. ಹಿಂದುತ್ವವೇ ಇಲ್ಲದಂತೆ ಆಗಿದೆ. ಇದು ಸರಿ ಹೋಗಬೇಕಾಗಿದೆ. ಕಾಲ ಹೀಗೆ ಇರುವುದಿಲ್ಲ. ಎಲ್ಲವೂ ಸರಿ ಹೋಗುತ್ತದೆ. ನಾನು ಮತ್ತೇ ಬಿಜೆಪಿ ಮರಳುವೆ ಎಂಬುದನ್ನು ಪರೋಕ್ಷವಾಗಿ ಹೇಳಿದರು.
ಇದನ್ನೂ ಓದಿ > >ಹೋಟೆಲ್, ಬೇಕರಿಗಳಿಗೆ ಎಸಿ-ತಹಶೀಲ್ದಾರ್ ದಿಢೀರ್ ಭೇಟಿ, 10 ದಿನಗಳ ಗಡುವು, ಕಾರಣವೇನು?
ಸಚಿವ ಬಸವರಾಜ ರೆಡ್ಡಿ ಅವರ ಇಸ್ಲಾಂ ಧರ್ಮವೇ ಶ್ರೇಷ್ಠ ಎಂಬ ಹೇಳಿಕೆಗೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪನವರು, ಅವರಿಗೆ ಉನ್ನತ ಶಿಕ್ಷಣ ಸಚಿವ ಖಾತೆ ಕೊಟ್ಟಿರುವುದೇ ಬಹುದೊಡ್ಡ ತಪ್ಪು. ಮುಸ್ಲಿಂರನ್ನು ಓಲೈಸುವ ಹೇಳಿಕೆ ಇದು. ಅವರು ಬೇಕಾದರೆ ಮುಂಜಿ ಮಾಡಿಸಿಕೊಳ್ಳಲ್ಲಿ ಎಂದು ಕಿಡಿಕಾರಿದ ಅವರು ಅವರನ್ನು ಮುಖ್ಯಮಂತ್ರಿಗಳು ಕೂಡಲೇ ಸಚಿವ ಸ್ಥಾನದಿಂದ ತೆಗೆದು ಹಾಕಬೇಕು. ಮತ್ತು ಗೃಹ ಸಚಿವರು ಇವರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು ಇಲ್ಲವೇ ಪೊಲೀಸರು ಸುಮೋಟ್ ಕೇಸ್ ದಾಖಸಿಕೊಳ್ಳಬೇಕು ಎಂದರು.














